ಆದರೆ, ಪೈಪ್ ಲೈನ್ ದುರಸ್ತಿ ಕಾರ್ಯ 3 ತಿಂಗಳಾದರೂ ಮುಗಿದಿಲ್ಲ , ಪರಿಣಾಮವಾಗಿ ಸಂಬಂಧಿಸಿದ ನಿವಾಸಿಗಳು ಕುಡಿಯುವ ನೀರಿಗಾಗಿ ಒಂದೆಡೆ ಪರದಾಡಿದರೆ, ಮತ್ತೊಂ ದೆಡೆ ಯಾರದೋ ತಪ್ಪಿಗೆ ಬಿರು ಬೇಸಿಗೆಯಲ್ಲಿ ಜೀವ ಜಲ ಪೋಲಾಗುತ್ತಿದ್ದು, ಜನ-ಜಾನು ವಾರುಗಳಿಗೆ ನೀರಿಲ್ಲದೆ ಅನೇಕ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತಿರುವ ಈ ಪರಿಸ್ಥಿತಿಯಲ್ಲಿ ಅಧಿಕಾರಿ ಗಳ ಬೇಜವಾಬ್ದಾರಿಂದ ಕುಡಿಯುವ ನೀರು ವ್ಯರ್ಥವಾಗುತ್ತಿರುವುದು, ಸಾರ್ವಜನಿಕ ವಲ ಯದಲ್ಲಿ ತಾಲೂಕು ಆಡಳಿತದ ವೈಖರಿಗೆ ವಿರೋಧ ವ್ಯಕ್ತವಾಗುತ್ತಿದೆ. ಇನ್ನಾದರೂ ಸಂಬಂಧಪಟ್ಟವರು ಕೂಡಲೇ ಕ್ರಮ ವಹಿಸಿ, ನೀರು ಪೋಲಾಗದಂತೆ ತಡೆದು ಅಗತ್ಯವಿರುವ ಗ್ರಾಮಗಳಿಗೆ ಶೀಘ್ರವೇ ಪೂರೈಕೆ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

